ನಿರ್ದೇಶಕ ಟಿ ಎನ್ ನಾಗೇಶ್ ಅವರು ‘ಸಂಭವ’ ಮೂಲಕ ಜಂಟಿ ನಿರ್ಮಾಪಕರು ಆಗಿದ್ದಾರೆ. ಅವರ ಪತ್ನಿ ತಾರಾ ಆರ್ ಹಾಗೂ ರಮೇಶ್, ರವಿಕುಮಾರ್ ಅವರು ‘ಸಂಭವ’ ಚಿತ್ರದ ನಿರ್ಮಾಪಕರುಗಳು. ಮುಹೂರ್ತವನ್ನು ಮೇ ೫ ರಂದು ನೆರವೇರಿಸಿದೆ ಚಿತ್ರ ತಂಡ. ಕನ್ನಡದಲ್ಲಿ ‘ಒಲವೇ ವಿಸ್ಮಯ, ಪಂಚಾಮೃತ’ ಸಿನಿಮಾಗಳ ನಿರ್ದೇಶಕ ಟಿ ಎನ್ ನಾಗೇಶ್ ಅವರು ತಂದೆ ಮಗನ ಭಾಂದವ್ಯ ಜೊತೆಗೆ ಪ್ರೀತಿ, ಕೊಲೆ ಹಾಗೂ ಸೆಂಟಿಮೆಂಟ್ ದೃಶ್ಯಗಳನ್ನು ‘ಸಂಭವ’ ಚಿತ್ರದ ಒಳಗೆ ಪೇರಿಸಿದ್ದಾರೆ.
ಶ್ರೀ ಲಕ್ಷ್ಮಿ ನರಸಿಂಹ ಮೂವೀಸ್ ಅಡಿಯಲ್ಲಿ ನಿರ್ಮಾಣ ಆಗುತ್ತಾ ಇರುವ ‘ಸಂಭವ’ ಸಧ್ಯಕ್ಕೆ ಚಿಕ್ಕಮಗಳೂರಿನಲ್ಲಿ ೧೫ ದಿವಸಗಳ ಚಿತ್ರೀಕರಣ ಮಾಡುತ್ತಾ ಇದೆ. ೩೫ ದಿವಸಗಳ ಚಿತ್ರೀಕರಣ ನಿರ್ದೇಶಕ ನಾಗೇಶ್ ಹಮ್ಮಿಕೊಂಡಿದ್ದಾರೆ.
ಐದು ಹಾಡುಗಳಿಗೆ ವೀರ ಸಮರ್ಥ ಅವರ ಸಂಗೀತ ಇದೆ, ಬೆನಕ ರಾಜು ಈ ಚಿತ್ರದ ಛಾಯಾಗ್ರಾಹಕರು. ಬಸವರಾಜ್ ಅವರ ಸಂಕಲನ, ಕೌರವ ವೆಂಕಟೇಶ್ ಅವರ ಸಾಹಸ, ವಸಂತ್ ಕುಲಕರ್ಣಿ ಅವರ ಕಲಾ ನಿರ್ದೇಶನ ಇದೆ.
ಈ ಚಿತ್ರದ ಮೂಲಕ ಭುವನ್ ನಾಯಕ ನಟ ಆಗುತ್ತಿದ್ದಾರೆ. ಪೂಜಾ ಚಿತ್ರದ ನಾಯಕಿ, ಗಿರೀಷ್ ಕಾರ್ನಾಡ್, ಸುಚಿಂದ್ರ ಪ್ರಸಾದ್, ಪದ್ಮಜ ರಾವ್ ಅವರು ತಾರಾಗಣದಲ್ಲಿ ಇದ್ದಾರೆ.